ಪ್ರೀತಿ ಇಲ್ಲದ ಮೇಲೆ

ಪ್ರೀತಿ ಇಲ್ಲದ ಮೇಲೆ

Hrudayaಪ್ರಿಯ ಸಖಿ,
ನಮ್ಮ ಸಮಾಜದಲ್ಲಿದ್ದ ಉನ್ನತ ಮೌಲ್ಯಗಳು ನಿರಂತರವಾಗಿ ಅಧೋಗತಿಗಿಳಿಯುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಕಾರಣವೇನು? ಹುಡುಕಹೊರಟರೆ ಸಾವಿರಾರು ಕಾರಣಗಳು ಸಿಕ್ಕಬಹುದು. ಆದರೆ ಕವಿ ಜಿ. ಎಸ್. ಶಿವರುದ್ರಪ್ಪನವರಿಗೆ ಹೊಳೆದಿರುವ ಒಂದೇ ಒಂದು ಮುಖ್ಯ ಕಾರಣ ನೋಡು.

ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?

ಕವಿಯ ಭಾವನೆ ಎಷ್ಟೊಂದು ಅರ್ಥಗರ್ಭಿತವಾಗಿದೆಯಲ್ಲವೇ ಸಖಿ? ನಮ್ಮಗಳ ನಡುವೆ ಪ್ರೀತಿ ಇಲ್ಲದಿರುವುದೇ ಈ ಎಲ್ಲ ಅಧೋಗತಿಗೆ ಕಾರಣವಲ್ಲವೇ ಪ್ರೀತಿಯೊಂದಿದ್ದರೆ ಬೇರೆಲ್ಲವನ್ನು ಮಾಫಿ ಮಾಡಬಹುದು ಎಂತಹ ಕಷ್ಟವಿದ್ದರೂ ಹೊಂದಾಣಿಕೆ ಮಾಡಿಕೊಳ್ಳಬಹುದು. ಹೃದಯ ವಿಶಾಲವಾಗುತ್ತಾ ಹೋಗಿ ಎಲ್ಲೆಡೆಯೂ ಪ್ರೀತಿಯನ್ನೇ ತುಂಬಬಹುದು. ಆದರೆ ……… ಅದೇ ಇಲ್ಲದಿದ್ದರೇ? ಮನುಷ್ಯನಾಗಿದ್ದು ಏನು ಪ್ರಯೋಜನ?

ಕವನದ ಕೊನೆಯಲ್ಲಿ ಕವಿ ಅತ್ಯಂತ ಮಾರ್ಮಿಕವಾಗಿ ನಮ್ಮ ಮುಂದೆ ಪ್ರಶ್ನೆಗಳನ್ನಿಡುತ್ತಾರೆ.
ಪ್ರೀತಿ ಇಲ್ಲದ ಮೇಲೆ
ಸಂಶಯದ ಗಡಿಗಳುದ್ದಕ್ಕೂ,
ಸಿಡಿಗುಂಡುಗಳ ಕದನ ನಿಂತೀತು ಹೇಗೆ ?
ಜಾತಿಮತಭಾಷೆ ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ ?
ಹೌದಲ್ಲವೇ ಸಖಿ? ಪ್ರೀತಿ-ಸ್ನೇಹಗಳಿಲ್ಲದೇ ನಮ್ಮ ಹೃದಯ ಬೆಂಗಾಡಾಗುವುದನ್ನು ತಪ್ಪಿಸುವದು ಹೇಗೆ? ಬರೀ ಸ್ವಾರ್ಥ, ಸಂಕುಚಿತ ಮನೋಭಾವ, ದ್ವೇಷ, ಅಸೂಯೆಗಳನ್ನೇ ತುಂಬಿಕೊಂಡು ಬರಡಾಗುತ್ತಿರುವ ನಮ್ಮೆಲ್ಲರ ಹೃದಯಗಳಲ್ಲೂ ಪ್ರೀತಿಯು ಚಿಗುರೊಡೆಯಬೇಕು. ಮರವಾಗಿ ಬೆಳೆಯಬೇಕು. ದಿಗಂತಕ್ಕೇರಿ ನಿಂತು ವಿಶ್ವವ್ಯಾಪಿಯಾಗಬೇಕು. ಆಗ ನಾವೆಲ್ಲರೂ ನಿಜವಾದ ಅರ್ಧದಲ್ಲಿ ಮಾನವರಾಗುತ್ತೇವೆ. ಇಲ್ಲದಿದ್ದರೆ ಭಾವನೆಗಳಿಲ್ಲದ ಬರಿಯ ಯಂತ್ರ ಮಾನವರಾಗುತ್ತೇವೆ! ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮಾ ಅಮ್ಮಾ ಒಂದೇ ಒಂದು
Next post ಕವಿಯ ಕಣ್ಣು ತೆರೆಯುತಿತ್ತು

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys